ಎನ್ಸಿಪಿ ನಾಯಕ, 73 ವರ್ಷದ ದೇಶ್ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ರಜಾ ಕಾಲದ ಪೀಠವು ಡಿ.12ರಂದು ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಸಿಬಿಐ ಸಮಯಾವಕಾಶ ಕೇಳಿತ್ತು. ಹಾಗಾಗಿ, ಹತ್ತು ದಿನಗಳ ಕಾಲಾವಕಾಶ ಕಲ್ಪಿಸಿ, ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ಅವರು ಡಿ.27 ರವರೆಗೆ ಆದೇಶಕ್ಕೆ ತಡೆ ನೀಡಿದ್ದರು.