ನವದೆಹಲಿ: ಸಾರ್ವಜನಿಕ ವಲಯದ ಉದ್ದಿಮೆ ಭಾರತೀಯ ಉಕ್ಕುಪ್ರಾಧಿಕಾರದ (ಎಸ್ಎಐಎಲ್) ಮಾಜಿ ಅಧ್ಯಕ್ಷ ವಿ.ಕೃಷ್ಣಮೂರ್ತಿ (97) ಅವರು ಚೆನ್ನೈನಲ್ಲಿ ಭಾನುವಾರ ನಿಧನರಾದರು.
ಅವರು ಬಿಎಚ್ಇಎಲ್, ಮಾರುತಿ ಉದ್ಯೋಗ, ಜಿಎಐಎಲ್ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅಂತ್ಯಕ್ರಿಯೆ ಸೋಮವಾರ (ಜೂನ್ 27) ನೆರವೇರಲಿದೆ ಎಂದು ಮೂಲಗಳು ಹೇಳಿವೆ.