ಶ್ರೀನಗರ: ಇಲ್ಲಿನ ಹೊರವಲಯದ ಹೈದರ್ಪೋರಾ ಪ್ರದೇಶದಲ್ಲಿ ಸೋಮವಾರ ಸೇನೆ, ಭದ್ರತಾ ಪಡೆ ಹಾಗೂ ಸ್ಥಳೀಯ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ವಿದೇಶಿ ಉಗ್ರ ಸೇರಿ ಆತನ ಇಬ್ಬರು ಸ್ಥಳೀಯ ಸಹಚರರು ಹತ್ಯೆಯಾಗಿದ್ದು, ಗುಂಡಿನ ಚಕಮಕಿಯಲ್ಲಿ ಉಗ್ರನಿದ್ದ ಮನೆಯ ಮಾಲೀಕರು ಬಲಿಯಾಗಿದ್ದಾರೆ.
ಹೈದರ್ ಹತ್ಯೆಗೀಡಾದ ಪಾಕ್ ಉಗ್ರ. ಈತನ ಸಹಚರನ ಗುರುತು ಪತ್ತೆ ಯಾಗಿಲ್ಲ. ತಳಮಟ್ಟದ ಕಾರ್ಯಕರ್ತ ಮುದಾಸೀರ್ ಗುಲ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಹೈದರ್ನ ಸಹಚರನನ್ನು ಜಮ್ಮುವಿನ ಬನಿಹಾಳ್ ಮೂಲದವನೆಂದು ತಿಳಿದುಬಂದಿದ್ದು, ಆತನ ಪೋಷಕರನ್ನು ಕರೆಸಲಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.