ಸರನ್ ಜಿಲ್ಲೆಯ ಮಲ್ಖಾಚಕ್ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಮಾತನಾಡಿದ ಭಾಗವತ್,‘ವಿಶ್ವಶಕ್ತಿ ಎಂಬ ಕಲ್ಪನೆಯೇ ಸರಿಯಲ್ಲ. ಇಂತಹ ಮಹಾತ್ವಾಕಾಂಕ್ಷೆ ಫಲವೇ ರಷ್ಯಾ–ಉಕ್ರೇನ್ ಯುದ್ದ. ಭಾರತದ ಪ್ರಾಚೀನ ನಾಗರಿಕತೆಯು ಎಂದಿಗೂ ವಿಶ್ವ ಕಲ್ಯಾಣವನ್ನೇ ಪ್ರತಿಪಾದಿಸುವುದರಿಂದ, ಅದು ವಿಶ್ವಶಕ್ತಿಯ ಮಹತ್ವಾಕಾಂಕ್ಷೆಯನ್ನು ಹೊಂದಲು ಸಾಧ್ಯವಿಲ್ಲ.’ ಎಂದು ಹೇಳಿದರು.