ಇಲ್ಲಿನ ಗಾಂಧಿಗ್ರಾಮ ಗ್ರಾಮೀಣ ಸಂಸ್ಥೆಯ 35ನೇ ಸಮಾವೇಶದಲ್ಲಿ ಮಾತನಾಡಿದ ಅವರು,‘ಗಾಂಧೀಜಿಯವರ ಮೌಲ್ಯಗಳು ಅತ್ಯಂತಪ್ರಸ್ತುತವಾಗುತ್ತಿವೆ. ಜಾಗತಿಕ ಸಂಘರ್ಷಗಳನ್ನು ಅಥವಾ ಹವಾಮಾನ ಬಿಕ್ಕಟ್ಟನ್ನು ಕೊನೆಗೊಳಿಸಲು ಹಾಗೂ ಇಂದಿನ ಸವಾಲುಗಳಿಗೆ ಗಾಂಧೀಜಿಯವರ ಚಿಂತನೆಗಳಲ್ಲಿ ಪರಿಹಾರಗಳಿವೆ. ಗಾಂಧೀಜಿಯವರ ಜೀವನವಿಧಾನ ಅನುಸರಿಸುವ ವಿದ್ಯಾರ್ಥಿಗಳಾದರೆ, ಬದುಕಿನಲ್ಲಿ ಮಹತ್ವದ ಅವಕಾಶಗಳೂ ಲಭಿಸುತ್ತವೆ. ಸಮಾಜದ ಮೇಲೂ ಉತ್ತಮ ಪ್ರಭಾವ ಬೀರಬಹುದು’ ಎಂದು ಹೇಳಿದರು.