ಇಲ್ಲಿಯ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಎನ್ಎಚ್ಆರ್ಸಿಯ 29ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ತಳವರ್ಗಗಳನ್ನು ಸುಧಾರಣೆಗಾಗಿ ಸರ್ಕಾರವು ಹಲವು ಸಾಮಾಜಿಕ– ಆರ್ಥಿಕ ಮತ್ತು ರಾಜಕೀಯ ಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಗಳ ಹೊರತಾಗಿಯೂ ಸಮಗ್ರ ಅಭಿವೃದ್ಧಿಗಾಗಿ ಮೀಸಲಾತಿ ಅಗತ್ಯವಿದೆ’ ಎಂದರು. ಜೊತೆಗೆ ಕಾರಾಗೃಹಗಳನ್ನು ತಕ್ಷಣವೇ ಅಭಿವೃದ್ಧಿಗೊಳಿಸುವ ಅಗತ್ಯದ ಕುರಿತುಅವರು ಒತ್ತಿ ಹೇಳಿದರು.