ವಾಗ್ವಾದದ ಪರಿಣಾಮ ಉಭಯ ಸದನಗಳಲ್ಲಿಯೂ ಕೆಲ ಬಾರಿ ಕಲಾಪವನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದಿನದ ಕಲಾಪ ಪಟ್ಟಿ ಕೈಬಿಡಲು ಕೋರಿ ನಿಯಮ 267ರಡಿ ನೋಟಿಸ್ ನೀಡಿದ್ದರು. ರಾಜ್ಯಸಭೆಯಲ್ಲಿ ವಿರೋಧಪಕ್ಷಗಳ ಸದನದ ನಾಯಕರಾದ ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ, ಡಿಎಂಕೆಯ ತಿರುಚಿ ಶಿವ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಅವರು ಕೂಡ ನೋಟಿಸ್ ನೀಡಿದ್ದರು.