ಬಳಿಕ ಪೊಲೀಸರು ಪ್ರತ್ಯುತ್ತರ ನೀಡಿದ್ದು, ಗುಂಡಿನ ಚಕಮಕಿಯಲ್ಲಿ ಕೊಲೆ ಆರೋಪಿ ಕೊಯಮತ್ತೂರಿನ ಸ್ಥಳೀಯ ಗ್ಯಾಂಗ್ನ ನಾಯಕ ಸಂಜಯ್ ರಾಜಾ ಗಾಯಗೊಂಡಿದ್ದಾನೆ. ರಾಜಾ, ಹದಿನೈದು ದಿನಗಳ ಹಿಂದೆ ನಗರದ ಅವರಂಪಾಲಯಂ ಪ್ರದೇಶದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಭಾಗಿಯಾಗಿದ್ದಾನೆ. ಕೆಲ ದಿನಗಳ ಹಿಂದೆ ಚೆನ್ನೈನ ನ್ಯಾಯಾಲಯದ ಮುಂದೆ ಶರಣಾಗಿದ್ದ ಆತನನ್ನು ಕಸ್ಟಡಿಗೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.