ಕೂನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಕುಮಾರ್, 'ನಾವು ಅಪಘಾತ ನಡೆದ ತಕ್ಷಣವೇ ಸ್ಥಳಕ್ಕೆ ತಲುಪಿದ್ದೇವೆ. ಮೂವರು ಜೀವಂತವಾಗಿರುವುದನ್ನು ನೋಡಿದ್ದೇವೆ. ಅವರಲ್ಲಿ ಒಬ್ಬರು ನೀರು ಕೊಡಿ ಎಂದು ಕೇಳುತ್ತಿದ್ದರು. ನಮ್ಮಲ್ಲಿ ನೀರು ಇರಲಿಲ್ಲ. ಆದರೆ ತಕ್ಷಣವೇ ಮೂವರನ್ನು ಪ್ರತ್ಯೇಕ ಕಂಬಳಿಯಲ್ಲಿ ಹೊತ್ತುಕೊಂಡು ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಗೆ ಸಾಗಿಸಿದೆವು' ಎಂದು ಹೇಳಿದ್ದಾರೆ.