ಬರ್ಲಿನ್: ಕೋವಿಡ್ ಪರಿಸ್ಥಿತಿ ಗಂಭೀರವಾಗಿರುವ ಭಾರತದಿಂದ ತನ್ನ ಪ್ರಜೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಪ್ರಯಾಣಿಕರ ಪ್ರವೇಶಕ್ಕೆ ಜರ್ಮನಿ ನಿರ್ಬಂಧ ಹೇರಿದೆ. ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಅವರು, ‘ಭಾರತದಲ್ಲಿ ಕೊರೊನಾದ ಹೊಸ ರೂಪಾಂತರ ಸೋಂಕು ಪತ್ತೆಯಾಗಿದ್ದು, ಪಿಡುಗಿನ ಕೇಂದ್ರ ಸ್ಥಾನವಾಗಿದೆ’ ಎಂದಿದ್ದಾರೆ.