ಮಂಗಳವಾರ ಬೆಳಿಗ್ಗೆ ಮುಂಬೈನ ನಂದನವನ ಭವನದಲ್ಲಿ ಸಭೆ ನಡೆಸಿ ಹೊರ ಬರುತ್ತಿದ್ದಾಗ ಅಲ್ಲಿಗೆ ಬಂದ ಅನ್ನದಾ ಧಾಮ್ರೆ ಎನ್ನುವ ಬಾಲಕಿಯೊಬ್ಬಳು ‘ನನ್ನನ್ನೂ ದೀಪಾವಳಿ ರಜೆಗೆ ಅಸ್ಸಾಂಗೆ ಕರೆದುಕೊಂಡು ಹೋಗಿ ಸಿಎಂ ಅಂಕಲ್, ನಾನು ನಿಮ್ಮ ಹಾಗೇ ಸಿಎಂ ಆಗಿ, ಮುಂದೆ ಪ್ರವಾಹದಲ್ಲಿ ಸಿಲುಕಿಕೊಂಡವರಿಗೆ ಸಹಾಯ ಮಾಡಬೇಕು’ಎಂದಿದ್ದಾಳೆ. ಬಾಲಕಿಯ ಈ ಮಾತನ್ನು ಕೇಳಿ ಸಿಎಂ ಸೇರಿದಂತೆ ಅಲ್ಲಿದ್ದವರು ಮುಗಳ್ನಕ್ಕು ಬಾಲಕಿಗೆ ಶುಭ ಕೋರಿ ಹೊರಟರು.