‘ಮೇಘಸ್ಫೋಟ (ಕ್ಲೌಡ್ಬರ್ಸ್ಟ್) ಎಂಬ ಹೊಸ ವಿಧಾನವೊಂದು ಈಗ ಬಂದಿದೆ. ಅದರ ಸುತ್ತಲೂ ಷಡ್ಯಂತ್ರಗಳಿವೆ ಎಂದು ಹಲವರು ಹೇಳುತ್ತಾರೆ. ಅದು ಎಷ್ಟು ಸತ್ಯ ಎಂಬುದರ ಬಗ್ಗೆ ನಮಗೆ ತಿಳಿದಿಲ್ಲ. ಕೆಲವು ದೇಶಗಳು ಉದ್ದೇಶಪೂರ್ವಕವಾಗಿ ನಮ್ಮ ದೇಶದಲ್ಲಿ ಮೇಘಸ್ಫೋಟ ಉಂಟುಮಾಡುತ್ತಿವೆ. ಮೊದಲು ಲೇಹ್ (ಲಡಾಖ್) ನಲ್ಲಿ ಮಾಡಿದರು. ಆನಂತರ ಉತ್ತರಾಖಂಡದಲ್ಲೂ ಅದನ್ನೇ ಮಾಡಿದ್ದಾರೆ. ಗೋದಾವರಿ ಜಲಾನಯನ ಪ್ರದೇಶದಲ್ಲಿಯೂ ಅದೇ ಆಗಿದೆ ಎಂಬ ಬಗ್ಗೆ ನಮಗೆ ಅಸ್ಪಷ್ಟ ಮಾಹಿತಿಗಳಿವೆ. ಅದೇನೇ ಇದ್ದರೂ, ಹವಾಮಾನ ಬದಲಾವಣೆಯಿಂದಲೂ ಇಂಥ ಅನಾಹುತಗಳು ಸಂಭವಿಸುತ್ತವೆ. ಹೀಗಾಗಿ ನಾವು ನಮ್ಮ ಜನರನ್ನು ರಕ್ಷಿಸಿಕೊಳ್ಳಬೇಕಾಗಿದೆ’ ಎಂದು ಕೆಸಿಆರ್ ಹೇಳಿದ್ದಾರೆ.