‘ವಿಶ್ವಜಿತ್ ರಾಣೆ (ಆರೋಗ್ಯ ಸಚಿವ), ಮೌವಿನ್ ಗೊಡೊನ್ಹೊ (ಸಾರಿಗೆ ಸಚಿವ), ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಅವರ ದಲ್ಲಾಳಿಗಳು ನಮ್ಮ ಅಭ್ಯರ್ಥಿಗಳನ್ನು ಖರೀದಿಸಲು ಈಗಲೇ ಪ್ರಯತ್ನಿಸುತ್ತಿದ್ದಾರೆ. ಉತ್ತಮ ಕೊಡುಗೆಗಳ ಭರವಸೆ ಕೊಡುತ್ತಿದ್ದಾರೆ. ನಾವು ಬಹಿರಂಗವಾಗಿಯೇ ಎಚ್ಚರಿಕೆ ನೀಡುತ್ತಿದ್ದೇವೆ. ಈಗಿನದ್ದು ಹೊಸ ಕಾಂಗ್ರೆಸ್. ಶಾಸಕರನ್ನು ಸೆಳೆಯುವ ಪ್ರಯತ್ನ ನಡೆದರೆ ಕಾಂಗ್ರೆಸ್ನ ಒಬ್ಬ ಕಾರ್ಯಕರ್ತನೂ ಸುಮ್ಮನೆ ಇರುವುದಿಲ್ಲ’ ಎಂದು ಗಿರೀಶ್ ಎಚ್ಚರಿಕೆ ಕೊಟ್ಟಿದ್ದಾರೆ.