ತಿರುಪತಿ: ಭಕ್ತರೊಬ್ಬರು ತಮ್ಮ ಹರಕೆ ನೆರವೇರಿಸಲು ಇಲ್ಲಿನ ಪ್ರಾಚೀನ ಬೆಟ್ಟದಲ್ಲಿರುವ ತಿರುಮಲ ದೇವಸ್ಥಾನಕ್ಕೆ ವೆಂಕಟೇಶ್ವರ ದೇವರ ಅಂಗೈಗಳನ್ನು ಅಲಂಕರಿಸಲು 5.3 ಕೆ.ಜಿ ತೂಕದ, ₹ 3 ಕೋಟಿ ಮೌಲ್ಯದ ರತ್ನಖಚಿತ ಚಿನ್ನದ ಕೈಗವಸುಗಳನ್ನು ಶುಕ್ರವಾರ ಅರ್ಪಿಸಿದ್ದಾರೆ.
ನಗರದ ಆಭರಣ ವ್ಯಾಪಾರಿಯಾಗಿರುವ ಅವರು ತನ್ನ ಕುಟುಂಬ ಸದಸ್ಯರೊಂದಿಗೆ ’ಕಟಿ–ಹಸ್ತಂ’ ಮತ್ತು ’ವರದ–ಹಸ್ತಂ’ ಎಂದು ಕರೆಯಲಾಗುವ ಕಾಣಿಕೆಯನ್ನು ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವೆಂಕಟ ಧರ್ಮ ರೆಡ್ಡಿ ಅವರಿಗೆ ಹಸ್ತಾಂತರಿಸಿದರು ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.