ಮುಂಬೈ ಮೂಲದ ಅಖಿಲ ಭಾರತ ಕೈಗಾರಿಕೆಗಳ ಒಕ್ಕೂಟ(ಎಐಎಐ) ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ₹80 ಸಾವಿರ ಕೋಟಿ ಇರುವ ಹಳ್ಳಿ ಕೈಗಾರಿಕೆಗಳನ್ನು ₹5 ಲಕ್ಷ ಕೋಟಿಗೆ ಏರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ, ಕೃಷಿ ಕ್ಷೇತ್ರ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಿ ಬಡತನವನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಗುರಿ’ ಎಂದರು.