ನವದೆಹಲಿ: ‘ಹಿಂಗಾರು ಬೆಳೆಗಳಿಗೆ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹಣದುಬ್ಬರ ದರಕ್ಕಿಂತಲೂ ಕಡಿಮೆ ಇದೆ. ಎಂಎಸ್ಪಿ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ’ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
‘ಎಂಎಸ್ಪಿ ಘೋಷಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿರುವುದಾಗಿ ಬಿಜೆಪಿ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ವಾಸ್ತವದಲ್ಲಿ ಅದು ರೈತರಿಗೆ ವಂಚಿಸಿದೆ. ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮಿಸಬೇಕೆಂಬ ರೈತರ ಶ್ರಮ, ಕೇಂದ್ರದ ಇಂಥ ಕ್ರಮದಿಂದ ವ್ಯರ್ಥವಾದಂತಾಗಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.
ಈ ಕುರಿತು ಅವರು ಹಿಂದಿಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಂಎಸ್ಪಿಯನ್ನು ಮಾತ್ರ ಘೋಷಣೆ ಮಾಡುತ್ತದೆ. ಆದರೆ, ಎಂಎಸ್ಪಿಯಂತೆ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡುವುದಿಲ್ಲ. ಹೀಗಾಗಿ, ಎಂಎಸ್ಪಿಗೆ ಕಾನೂನು ಮಾನ್ಯತೆ ನೀಡುವ ಕಾಯ್ದೆ ಜಾರಿಗೆ ತರುವುದು ಇಂದಿನ ತುರ್ತು’ ಎಂದು ಅವರು ಟ್ವೀಟ್ನಲ್ಲಿ ಆಗ್ರಹಿಸಿದ್ದಾರೆ.
1/6 दीपावली की चहल पहल और रोशनी में अन्नदाता किसान की मेहनत का #MSP फिर खो गया।
रबी फसलों की MSP की घोषणा कर मोदी सरकार ने अपनी पीठ थपथपा ली पर किसान को ठग कर फिर खून के आँसु बहाने के लिये छोड़ दिया।