‘ಪಿಂಚಣಿ ಯೋಜನೆಗಳಿಗೆ ಭಾರತ ಸರ್ಕಾರದಿಂದ ಹಣ ಬರುತ್ತದೆ. ರಾಜ್ಯ ಸರ್ಕಾರ ಆ ಹಣವನ್ನು ಮುಂಗಡರೂಪದಲ್ಲಿ ನೀಡುತ್ತಿದೆ ಅಷ್ಟೇ. ಆದರೆ, ವಿದ್ಯುತ್ ಬಿಲ್, ಆಸ್ತಿ ತೆರಿಗೆ ಅಥವಾ ಜಿಎಸ್ಟಿಯಲ್ಲಿ ರಾಜ್ಯ ಸರ್ಕಾರ ಯಾವುದೇ ರಿಯಾಯಿತಿಗಳನ್ನು ನೀಡಿಲ್ಲ. ಅಂತೆಯೇ, ಸಲೂನ್ ಆಪರೇಟರ್ಗಳು, ಸಣ್ಣ ಉದ್ಯಮಿಗಳು, ಸಣ್ಣ ಮಾರಾಟಗಾರರಿಗೆ ಯಾವುದೇ ಹಣಕಾಸಿನ ನೆರವು ಘೋಷಿಸಿಲ್ಲ. ಈ ಎಲ್ಲ ಉದ್ಯಮಗಳು ಹೆಚ್ಚು ಕಾರ್ಮಿಕರ ಬಲದಿಂದ ನಡೆಯುವಂತಹವು. ಈ ಕಾರ್ಮಿಕರಿಗೆ ಬೇರೆ ಯಾವುದೇ ಗಳಿಕೆಯ ಮಾರ್ಗವಿರುವುದಿಲ್ಲ‘ ಎಂದು ಫಡಣವೀಸ್ ಹೇಳಿದರು.