ಹಿಂಗಾರು ಅವಧಿಯ ಪ್ರಮುಖ ಬೆಳೆಯಾದ ಗೋಧಿಯ ಎಂಎಸ್ಪಿಯನ್ನು ₹ 50 ಏರಿಕೆ ಮಾಡಲಾಗಿದ್ದು, ಕ್ವಿಂಟಲ್ಗೆ ₹1,975 ನಿಗದಿಪಡಿಸಲಾಗಿದೆ ಎಂದು ಲೋಕಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು. ಜೊತೆಗೆ ಬೇಳೆಕಾಳು, ಕಡಲೆ, ಜವೆ, ಸಾಸಿವೆ,ಕುಸುಂಬೆ ಹೂವಿನ ದಳದ(ಸ್ಯಾಫ್ಲವರ್) ಎಂಎಸ್ಪಿಯನ್ನೂ ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸಂಸತ್ ಅಂಗೀಕರಿಸಿದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.