‘ಇದೇ ಮಾರ್ಗದ ಮೂಲಕ ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಯಿಂದ ವನವಾಸಕ್ಕೆ ತೆರಳಿದ್ದರು ಎಂಬ ಪ್ರತೀತಿಯಿದೆ. ಹಾಗಾಗಿ ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಸಂಪರ್ಕ ಕಲ್ಪಿಸುವ 210 ಕಿ.ಮೀ ಉದ್ದದ ರಾಮ್ ವನ್ ಗಮನ್ ಪಥವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಮಾರ್ಗವು ಫೈಜಾಬಾದ್, ಸುಲ್ತಾನಪುರ, ಪ್ರತಾಪ್ಗಢ, ಜೇತ್ವಾರಾ, ಶರಿಂಗ್ವರ್ಪುರ, ಮಂಜನ್ಪುರ ಮತ್ತು ರಾಜ್ಪುರದ ಮೂಲಕ ಹಾದು ಹೋಗಲಿದೆ’ ಎಂದು ಸಚಿವಾಲಯವು ತಿಳಿಸಿದೆ.