40 ಪತ್ರಕರ್ತರು, ಸಚಿವರು, ವಿರೋಧ ಪಕ್ಷಗಳ ನಾಯಕರು, ಭಾರತದ ಹಲವಾರು ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ 300ಕ್ಕೂ ಹೆಚ್ಚು ನಾಗರಿಕರ ಮೊಬೈಲ್ ಫೋನ್ಗಳನ್ನು ಪೆಗಾಸಸ್ ಗೂಢಚಾರಿಕೆ ತಂತ್ರಾಂಶದ ಮೂಲಕ ಹ್ಯಾಕ್ ಮಾಡಲಾಗಿದೆ ಎಂದು ನ್ಯೂಸ್ ಪೋರ್ಟಲ್ 'ದಿ ವೈರ್' ವರದಿ ಮಾಡಿತ್ತು. ‘ಇಸ್ರೇಲ್ನ ಎನ್ಎಸ್ಒ ಗುಂಪಿನ ಈ ಗೂಢಚಾರಿಕೆ ತಂತ್ರಾಂಶಕ್ಕೆ ಭಾರತದಲ್ಲೇ ಗ್ರಾಹಕರಿದ್ದಾರೆ‘ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಚಿದಂಬರಂ ಅವರು ಆ ಗ್ರಾಹಕ ಯಾರು ಎಂದು ತಮ್ಮ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.