ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಆಶ್ರಮ ಅಭಿವೃದ್ಧಿ: ಸೂಚನೆ

ಸಬರಮತಿ ಆಶ್ರಮ ಪುನರಾಭಿವೃದ್ಧಿ ಯೋಜನೆ
Last Updated 1 ಜುಲೈ 2021, 21:48 IST
ಅಕ್ಷರ ಗಾತ್ರ

ಅಹಮದಾಬಾದ್: ಸಬರಮತಿ ಗಾಂಧಿ ಆಶ್ರಮದ ಅಭಿವೃದ್ದಿಗೆ ರೂಪಿಸ ಲಾಗಿರುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡುವ ನಿರ್ಣಯವನ್ನು ಅಂಗೀಕರಿ ಸುವಂತೆ ಗುಜರಾತ್‌ ಸರ್ಕಾರವು ಆಶ್ರಮಕ್ಕೆ ಸಂಬಂಧಿಸಿದ ಐದು ಟ್ರಸ್ಟ್‌ಗಳನ್ನು ಕೇಳಿದೆ.

ಮಹಾತ್ಮ ಗಾಂಧಿ ಅವರು ಸ್ಥಾಪಿಸಿದ ಸಬರಮತಿ ಆಶ್ರಮವನ್ನು ವಿಶ್ವ ದರ್ಜೆಯ ಸ್ಮಾರಕವನ್ನಾಗಿ ಪರಿವರ್ತಿಸುವ ಉದ್ದೇಶ ದಿಂದ, ಅಲ್ಲಿ ಅಭಿವೃದ್ಧಿ ಕಾರ್ಯಗಳ ಯೋಜನೆಯನ್ನು ಸರ್ಕಾರ ರೂಪಿಸಿದೆ.

ಸಂಬಂಧಿಸಿದ ಟ್ರಸ್ಟ್‌ಗಳು ತಮ್ಮ ಆಸ್ತಿ, ಚಟುವಟಿಕೆ, ನಿವಾಸಿಗಳು ಮತ್ತು ಇತರರ ಸಂಬಂಧಿತ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಈ ಸಂಬಂಧ ಗುರುವಾರ ಸಭೆ ಸೇರಿದ್ದ ಟ್ರಸ್ಟಿಗಳು ಆಶ್ರಮದ ಪುನರಾಭಿವೃದ್ದಿಗಾಗಿ ಸರ್ಕಾರ ಹೊಂದಿರುವ ಅಧಿಕೃತ ಯೋಜನೆಯ ಮಾಹಿತಿ ಒದಗಿ ಸುವಂತೆ ಕೋರಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT