‘ಅಂಗಡಿ ತೆರವುಗೊಳಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಕಾರಣ ನೀಡಿ, ನನ್ನ ಚಹಾ ಅಂಗಡಿಯನ್ನು ತೆರವುಗೊಳಿಸಲಾಯಿತು. ಇದರಿಂದಾಗಿ ನಾನು ಉದ್ಯೋಗ ಕಳೆದುಕೊಂಡೆ. ವಿಚಾರಣೆಗೆ ಹಾಜರಾಗಲು ಕೂಡ ಬೇರೆ ಅವರಿಂದ ಹಣ ಪಡೆದು ಅಹಮದಾಬಾದ್ಗೆ ಬರಬೇಕಾಗಿತ್ತು. ಬಹಳ ಸಮಯವಾದರೂ ಪ್ರಕರಣದ ವಿಚಾರಣೆ ಪೂರ್ಣಗೊಂಡಿಲ್ಲ. ಇದರಿಂದ ಹತಾಶೆಗೊಂಡು ನ್ಯಾಯಮೂರ್ತಿ ಮೇಲೆ ಚಪ್ಪಲಿ ಎಸೆದೆ’ ಎಂದು ಬಾವಜೀ ತಿಳಿಸಿದ್ದರು.