‘ನನಗೆ ಎರಡು ಬೇಡಿಕೆಗಳಿವೆ. ಮೊದಲನೆಯದು, ಪ್ರಧಾನಿಯವರ ಈ ಭದ್ರತಾ ವೈಫಲ್ಯವನ್ನು ಯಾವುದೇ ಪಕ್ಷಪಾತ ಇಲ್ಲದೆ ತನಿಖೆ ಮಾಡಬೇಕು. ಯಾಕೆಂದರೆ ಪ್ರತಿಬಾರಿಯೂ ಅವರು ಚುನಾವಣಾ ಪ್ರಚಾರಕ್ಕೆ ತೆರಳುವಾಗ, ಆ್ಯಂಬುಲೆನ್ಸ್ ಯಾವುದೇ ಭದ್ರತಾ ತಪಾಸಣೆ ಇಲ್ಲದೆ ಬರುತ್ತದೆ. ಇದು ಕಾಕತಾಳಿಯವಾಗಲು ಸಾಧ್ಯವಿಲ್ಲ‘ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೇಳಿದ್ದಾರೆ.