‘2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಹಲವರು ನೀಲಿಚಿತ್ರ ವೀಕ್ಷಿಸಿ ಸಿಕ್ಕಿ ಬಿದ್ದಿದ್ದರು. ಆ ವಿಡಿಯೊಗಳು ಬಹಿರಂಗ ಆಗಿದ್ದವು. ಎಲ್ಲರೂ ಶುದ್ಧರು ಎಂದು ನಾನು ಹೇಳುವುದಿಲ್ಲ. ಪ್ರತಿಯೊಬ್ಬರಿಗೂ ಒಂದು ಲೋಪ ಇರುತ್ತದೆ. ಆದರೆ, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯು ಇಂತಹವರನ್ನೇ ರಕ್ಷಿಸಲಿದೆ. ಅವರು ಇನ್ನಷ್ಟು ಬಲಗೊಳ್ಳಲು ನೆರವಾಗುತ್ತದೆ. ಇದು, ಬಿಜೆಪಿಯ ಸಮಸ್ಯೆಯೂ ಹೌದು‘ ಎಂದು ದಿನೇಶ್ ಪ್ರತಿಕ್ರಿಯಿಸಿದರು.