‘ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಮುಂದೆ ಗುಪ್ಕಾರ್ ಕೂಟವು ತನ್ನ ನಿಲುವನ್ನು ಮಂಡಿಸಲಿದೆ. ರಾಜ್ಯದ ಕೆಲವು ಪಕ್ಷಗಳ ಮುಖಂಡರಿಗೆ ವೈಯಕ್ತಿಕ ಆಹ್ವಾನ ಇರುವುದರಿಂದ ಅವರೆಲ್ಲರೂ ಪ್ರತ್ಯೇಕವಾಗಿ ತಮ್ಮ ನಿಲುವುಗಳನ್ನು ಮಂಡಿಸುವರು. ಸಭೆಯಲ್ಲಿ ನಾವು ಹೇಳಿದ್ದೇನು, ಅದಕ್ಕೆ ಸರ್ಕಾರದ ಪ್ರತಿಕ್ರಿಯೆ ಏನಾಗಿತ್ತು ಎಂಬುದರ ಮಾಹಿತಿಯನ್ನು ಸಭೆಯ ನಂತರ ನಿಮ್ಮೆಲ್ಲರಿಗೂ ನೀಡುತ್ತೇವೆ’ ಎಂದು ಅಬ್ದುಲ್ಲಾ ಸುದ್ದಿಗಾರರಿಗೆ ತಿಳಿಸಿದರು.