ಈ ಕುರಿತು ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ನಮ್ಮ ‘ಅನ್ನದಾತರು’ ದೆಹಲಿಯ ರಸ್ತೆಗಳಲ್ಲಿದ್ದಾರೆ ಎಂಬುದನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಪ್ರತಿಭಟನೆಯು ನೂರಕ್ಕಿಂತಲೂ ಹೆಚ್ಚು ದಿನಗಳು ಮುಂದುವರಿದಿರುವುದು ಕಳವಳಕಾರಿ ಅಂಶ’ ಎಂದು ಉಲ್ಲೇಖಿಸಿದ್ದಾರೆ.