‘ನಮ್ಮದು ತಾಲಿಬಾನ್ ರಾಜ್ಯವಲ್ಲ’ ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು, ‘ಈ ರೀತಿಯ ಘೋಷಣೆಗಳು ಈ ಹಿಂದೆ ಕೋಮು ಘರ್ಷಣೆ ಭುಗಿಲೇಳುವುದಕ್ಕೆ ಕಾರಣವಾಗಿವೆ. ಆ ಮೂಲಕ ಗಲಭೆ, ಜೀವ ಮತ್ತು ಆಸ್ತಿ ನಷ್ಟಗಳು ಸಂಭವಿಸಿವೆ’ ಎಂದು ಅಭಿಪ್ರಾಯಪಟ್ಟು ತೋಮರ್ಬ ಅವರ ಅರ್ಜಿಯನ್ನು ವಜಾಗೊಳಿಸಿದರು.