ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ: ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

Last Updated 24 ಆಗಸ್ಟ್ 2021, 8:32 IST
ಅಕ್ಷರ ಗಾತ್ರ

ನವದೆಹಲಿ: ಕೋಮು ದ್ವೇಷದ ಘೋಷಣೆಗಳನ್ನು ಕೂಗಿದ ಆರೋಪ ಹೊತ್ತಿರುವ ‘ಹಿಂದೂ ರಕ್ಷಾ ದಳ’ದ ಅಧ್ಯಕ್ಷ ಭೂಪಿಂದರ್‌ ತೋಮರ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿಯ ನ್ಯಾಯಾಲಯ ವಜಾಗೊಳಿಸಿದೆ.

‘ನಮ್ಮದು ತಾಲಿಬಾನ್‌ ರಾಜ್ಯವಲ್ಲ’ ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನಿಲ್ ಆಂಟಿಲ್ ಅವರು, ‘ಈ ರೀತಿಯ ಘೋಷಣೆಗಳು ಈ ಹಿಂದೆ ಕೋಮು ಘರ್ಷಣೆ ಭುಗಿಲೇಳುವುದಕ್ಕೆ ಕಾರಣವಾಗಿವೆ. ಆ ಮೂಲಕ ಗಲಭೆ, ಜೀವ ಮತ್ತು ಆಸ್ತಿ ನಷ್ಟಗಳು ಸಂಭವಿಸಿವೆ’ ಎಂದು ಅಭಿಪ್ರಾಯಪಟ್ಟು ತೋಮರ್‌ಬ ಅವರ ಅರ್ಜಿಯನ್ನು ವಜಾಗೊಳಿಸಿದರು.‌

ಜಂತರ್‌ ಮಂತರ್‌ನಲ್ಲಿ ಆಗಸ್ಟ್‌ 8ರಂದು ನಡೆದ ರ್‍ಯಾಲಿಯಲ್ಲಿ ತೋಮರ್‌ ಅವರು ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚಾರ ಮಾಡಲು ಕೋಮು ಘೋಷಣೆಗಳನ್ನು ಕೂಗುವ ಮೂಲಕ ಯುವ ಜನರನ್ನು ಪ್ರಚೋದಿಸಿದ್ದರು ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT