‘ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ ಪ್ರಧಾನಿಯವರ ನಿಧಿ(ಪಿಎಂ ಕೇರ್ಸ್ ಫಂಡ್) ಸಾಮಾನ್ಯ ವಿಷಯವಲ್ಲ. ಇಷ್ಟೊಂದು ಮಹತ್ವದ ವಿಷಯಕ್ಕೆ ಒಂದು ಪುಟದ ಪ್ರತಿಕ್ರಿಯೆ ಸಲ್ಲಿಸುವುದಾ?ಅದರಾಚೆಗೆ ಏನೂ ಇಲ್ಲವೇ? ಅರ್ಜಿದಾರರ ವಕೀಲರು ಎತ್ತಿರುವ ಒಂದು ವಿಷಯವೂ ಇದರಲ್ಲಿ ಇಲ್ಲ. ನಮಗೆ ವಿಸ್ತೃತ ಪ್ರತಿಕ್ರಿಯೆ ಬೇಕು’ ಎಂದು ಪೀಠವು, ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿತು.