ನವದೆಹಲಿ: ಕೋವಿಡ್ ಪಿಡುಗಿನ ಸಂದರ್ಭದಲ್ಲಿ ‘ಸೆಂಟ್ರಲ್ ವಿಸ್ತಾ’ ಯೋಜನೆಯ ಕಾರ್ಯವನ್ನು ಮುಂದುವರಿಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ನೀಡಲಿದೆ.
ಪಿಡುಗಿನ ಸಮಯದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ಇದೇ 31ರಂದು ತೀರ್ಪು ನೀಡಲು ನಿರ್ಧರಿಸಿದೆ. ಈ ಕುರಿತು ಹೈಕೋರ್ಟ್ ಶನಿವಾರ ಪಟ್ಟಿ ಸಿದ್ಧಪಡಿಸಿದೆ.
ಅರ್ಜಿದಾರರಾದ ಅನ್ಯ ಮಲ್ಹೋತ್ರಾ, ಸೊಹೇಲ್ ಹಾಶ್ಮಿ ಅವರು ಯೋಜನೆಯು ಅತ್ಯಗತ್ಯ ಚಟುವಟಿಕೆಯಲ್ಲ ಹಾಗೂ ಅದನ್ನುಸದ್ಯಕ್ಕೆ ತಡೆಹಿಡಿಯಬಹುದು ಎಂದು ವಾದಿಸಿದ್ದರು. ಈ ಕುರಿತ ತನ್ನ ತೀರ್ಪನ್ನು ಹೈಕೋರ್ಟ್ ಮೇ 17ರಂದು ಕಾಯ್ದಿರಿಸಿತ್ತು.