ಜೈಪುರ: ರಾಜಸ್ಥಾನದ ಪೂರ್ವ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.
ಮಳೆಯಿಂದಾಗಿ ಜೋಧಪುರ ವಲಯದ ಗುಧಾ ಮತ್ತು ಗೋವಿಂದಿ ಮಾರ್ವಾರ ರೈಲ್ವೆ ನಿಲ್ದಾಣದ ಹಳಿಗಳು ಹಾನಿಗೊಂಡಿದ್ದು, ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು.
ನಗೌರ್, ಬಾರನ್, ಜೈಪುರ, ಕರೌಲಿ, ಸಿಕಾರ್, ಅಲ್ವರ್, ಝುಂಝುನು ಮತ್ತು ಚುರು ಜಿಲ್ಲೆಗಳ ಕೆಲವೆಡೆ ಶನಿವಾರ ಬೆಳಗಿನವರೆಗೆ ಭಾರಿ ಮಳೆಯಾಗಿದೆ.
ಬಾರನ್ ಜಿಲ್ಲೆಯಲ್ಲಿ ಗರಿಷ್ಠ 304 ಮಿ.ಮೀ ಮಳೆ ದಾಖಲಾಗಿದ್ದು, ಟೋಂಕ್ ಪಟ್ಟಣದಲ್ಲಿ 192 ಮಿ.ಮೀ ಮಳೆ ದಾಖಲಾಗಿದೆ. ಬರಾನ್ ಮತ್ತು ಜಲ್ವಾರ್ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.