ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಭಾರಿ ಮಳೆ: ರೈಲು ಸೇವೆ ವ್ಯತ್ಯಯ

Last Updated 31 ಜುಲೈ 2021, 15:07 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಪೂರ್ವ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ.

ಮಳೆಯಿಂದಾಗಿ ಜೋಧಪುರ ವಲಯದ ಗುಧಾ ಮತ್ತು ಗೋವಿಂದಿ ಮಾರ್ವಾರ ರೈಲ್ವೆ ನಿಲ್ದಾಣದ ಹಳಿಗಳು ಹಾನಿಗೊಂಡಿದ್ದು, ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾಯಿತು.

ನಗೌರ್, ಬಾರನ್, ಜೈಪುರ, ಕರೌಲಿ, ಸಿಕಾರ್, ಅಲ್ವರ್, ಝುಂಝುನು ಮತ್ತು ಚುರು ಜಿಲ್ಲೆಗಳ ಕೆಲವೆಡೆ ಶನಿವಾರ ಬೆಳಗಿನವರೆಗೆ ಭಾರಿ ಮಳೆಯಾಗಿದೆ.

ಬಾರನ್‌‌ ಜಿಲ್ಲೆಯಲ್ಲಿ ಗರಿಷ್ಠ 304 ಮಿ.ಮೀ ಮಳೆ ದಾಖಲಾಗಿದ್ದು, ಟೋಂಕ್‌ ಪಟ್ಟಣದಲ್ಲಿ 192 ಮಿ.ಮೀ ಮಳೆ ದಾಖಲಾಗಿದೆ. ಬರಾನ್ ಮತ್ತು ಜಲ್ವಾರ್ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT