ನವದೆಹಲಿ: ಈ ಮುಂಗಾರು ಅಧಿವೇಶನ ದೇಶದ ಗಡಿಗಳನ್ನು ಕಾಯುತ್ತಿರುವ ಯೋಧರ ಹಿಂದೆ ದೇಶ ನಿಂತಿದೆ ಎಂಬ ಒಗ್ಗಟ್ಟಿನ ಸಂದೇಶವನ್ನು ಸಾರುವ ವಿಶ್ವಾಸವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಸೋಮವಾರ ಮುಂಗಾರು ಅಧಿವೇಶನದ ಆರಂಭಕ್ಕೂ ಮುನ್ನ ಹೇಳಿಕೆ ನೀಡಿರುವ ಅವರು, ’ಮುಂದಿನ ದಿನಗಳಲ್ಲಿಯೂ ಸಂಭವಿಸಬಹುದಾದ ಹಿಮಪಾತದಂತಹ ಸಂಕಷ್ಟಗಳನ್ನು ಎದುರಿಸುತ್ತಾ ಧೈರ್ಯದಿಂದ ದೇಶವನ್ನು ಯೋಧರು ರಕ್ಷಿಸಲಿದ್ದಾರೆ’ ಎಂದರು.
ಮುಂಗಾರು ಅಧಿವೇಶನದಲ್ಲಿ ಪ್ರಮುಖವಾದ ವಿಷಯಗಳ ಚರ್ಚೆಗಳು ನಡೆಯಲಿದ್ದು, ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ. ಸಂಸದರು ಈ ಎಲ್ಲ ಚರ್ಚೆಗಳಲ್ಲೂ ಭಾಗವವಹಿಸಿ ಮಾಹಿತಿ ಹಂಚಿಕೊಳ್ಳತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗದ ನಡುವೆ ಸಂಸದರು ತಮ್ಮ ಕರ್ತವ್ಯ ನಿರ್ವಹಿಸಿಲು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದು, ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.