ಹೆರಿಗೆಯಾದ ಕೆಲವು ಗಂಟೆಗಳ ಬಳಿಕ ಕುಸುಮ್ ತಾನು ಭೂಗೋಳದ ಪರೀಕ್ಷೆಗೆ ಹಾಜರಾಗಬೇಕೆಂಬ ಹಂಬಲ ವ್ಯಕ್ತಪಡಿಸಿದರು. ಪರೀಕ್ಷೆ ಬರೆಯಲು ಅವರು ಅಲ್ಲಿನ ಗಾಂಧಿ ಪ್ರೌಢಶಾಲೆಗೆ ಹೋಗಬೇಕಿತ್ತು. ಈ ಬಗ್ಗೆ ವೈದ್ಯರ ಗಮನಕ್ಕೆ ತರಲಾಯಿತು. ಕುಸುಮ್ ಅವರ ಓದಿನ ಹಂಬಲ ಮತ್ತು ದೃಢಮನಸ್ಸನ್ನು ಶ್ಲಾಘಿಸಿದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ, ತಾಯಿ–ಮಗುವಿನ ಆರೋಗ್ಯ ಪರಿಶೀಲಿಸಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಿದರು.