ನವದೆಹಲಿ: ಈಚೆಗಷ್ಟೇ ಎಡಗಾಲು ಉಳುಕಿರುವ ಕಾರಣ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮಂಗಳವಾರ ಸಂಸತ್ತಿಗೆ ಗಾಲಿಕುರ್ಚಿಯಲ್ಲಿ ಬಂದರು. ಈ ವೇಳೆ ತಮಗಾದ ಅನುಭವವನ್ನು ದಾಖಲಿಸಿರುವ ಅವರು, ‘ಅಂಗವಿಕಲರಿಗೆ ನಾವು ಎಂಥ ಕೆಟ್ಟ ಸೌಲಭ್ಯ ಕಲ್ಪಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
‘ನೀವು ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಬರಬೇಕಾದರೆ, ಬಾಗಿಲು ಸಂಖ್ಯೆ 9ರಲ್ಲಿ ಮಾತ್ರ ಒಂದೇ ಒಂದು ರ್ಯಾಂಪ್ ಪ್ರವೇಶ ದೊರೆಯುತ್ತದೆ. ಸಹಾಯಕರ ನೆರವಿನೊಂದಿಗೆ ನೀವು ಗಾಲಿಕುರ್ಚಿಯಲ್ಲಿ ನಾಲ್ಕು ನಿಮಿಷ ಪ್ರಯಾಣಿಸಿದರೆ ಸಂಸತ್ತಿನ ಒಳಗೆ ಹೋಗಬಲ್ಲಿರಿ. ಈ ತಾತ್ಕಾಲಿಕ ಅಂಗವೈಕಲ್ಯವು ನಾವು ಅಂಗವಿಕಲರಿಗೆ ಎಷ್ಟು ಕೆಟ್ಟ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಅಂಗವಿಕಲರಿಗೆ ನಾನು ಬೆಂಬಲ ನೀಡುತ್ತೇನೆ’ ಎಂದು ತರೂರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.