ಶಿಮ್ಲಾ: ವಿಧಾನಸಭೆಯಲ್ಲಿ ಮಾಸ್ಕ್ ಧರಿಸದ ಕಾರಣಕ್ಕೆ ಮುಖ್ಯಮಂತ್ರಿ ಜೈರಾಂ ಠಾಕೂರ್ ಅವರಿಗೆ ₹5,000 ದಂಡ ವಿಧಿಸುವಂತೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಶಾಸಕರೊಬ್ಬರು ಸ್ಪೀಕರ್ ವಿಪಿನ್ ಪರ್ಮಾರ್ ಅವರಿಗೆ ಶನಿವಾರ ಮನವಿ ಮಾಡಿದ್ದಾರೆ.
ಕೋವಿಡ್ ಹರಡುವುದನ್ನು ತಡಗಟ್ಟುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಸಂದೇಶ ಈ ಸದನದ ಮೂಲಕ ಸಾರ್ವಜನಿಕರಿಗೆ ಹೋಗಬೇಕು ಎಂದು ಬಜೆಟ್ ಅಧಿವೇಶನದ ಕೊನೆಯ ದಿನವಾದ ಶನಿವಾರ ಶಿಲ್ಲೈ ಶಾಸಕ ಹರ್ಷವರ್ಧನ್ ಚವ್ಹಾಣ್ ಹೇಳಿದ್ದಾರೆ.
ಹರ್ಷವರ್ಧನ್ ಚವ್ಹಾಣ್, ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದಾಗ ಸಭಾಪತಿ ಪೀಕರ್ ವಿಪಿನ್ ಪರ್ಮಾರ್ ಅವರು ಕೂಡ ಮಾಸ್ಕ್ ಧರಿಸಿರಲಿಲ್ಲ.