ಸಚಿವರಾದ ಸುರೇಶ್ ಭಾರದ್ವಾಜ್ ಮತ್ತು ರಾಕೇಶ್ ಪಟಾನಿಯ ಸ್ಪರ್ಧಾ ಕ್ಷೇತ್ರವನ್ನು ಬದಲಿಸಲಾಗಿದ್ದು, ಶಿಮ್ಲಾ ನಗರ ಕ್ಷೇತ್ರದ ಹಾಲಿ ಶಾಸಕ ಭಾರದ್ಜಾಜ್ ಅವರಿಗೆ ಕಸುಂಪ್ಟಿ ಮತ್ತು ನೂರ್ಪುರ ಶಾಸಕ ಪಟಾನಿಯ ಅವರಿಗೆ ಫತೇಪುರ ಪ್ರದೇಶದಿಂದ ಟಿಕೆಟ್ ನೀಡಲಾಗಿದೆ.
ಸಚಿವ, ಧರಂಪುರದ ಶಾಸಕ ಮಹೇಂದ್ರ ಸಿಂಗ್ ಬದಲಿಗೆ ಅವರ ಪುತ್ರ ರಜತ್ ಠಾಕೂರ್ಗೆ ಅವಕಾಶ ನೀಡಲಾಗಿದೆ. ಮಾಜಿ ಕೇಂದ್ರ ಸಚಿವ ಸುಖ್ರಾಮ್ ಪುತ್ರ ಅನಿಲ್ ಶರ್ಮಾ ಮಂಡಿಯಿಂದ ಸ್ಪರ್ಧಿಸಲಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂಟು ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. ಮೂರು ಸ್ಥಾನ ಎಸ್ಟಿ ವರ್ಗದ ಅಡಿಯಲ್ಲಿ ಮೀಸಲಿಡಲಾಗಿದೆ. ಒಟ್ಟಾರೆ ಪಟ್ಟಿಯಲ್ಲಿ ಐವರು ಮಹಿಳಾ ಅಭ್ಯರ್ಥಿಗಳಿದ್ದಾರೆ.
ಸೋಮವಾರ ನಡೆದ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸಭೆಯ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
68 ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಅಕ್ಟೋಬರ್ 25 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.