ತೆಲಂಗಾಣ ರಾಜ್ಯದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿನ ಅಪ್ಡೇಟ್ ಪ್ರಕಾರ, ಟಿಆರ್ಎಸ್ 55 ವಾರ್ಡ್ಗಳಲ್ಲಿ ಮತ್ತು ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 44 ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 48 ವಾರ್ಡ್ಗಳಲ್ಲಿ ಹಾಗೂ ಕಾಂಗ್ರೆಸ್ 2 ವಾರ್ಡ್ನಲ್ಲಿ ಗೆಲುವು ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭಿವೃದ್ಧಿ ರಾಜಕೀಯದ ಮೇಲೆ ಮತ್ತೊಮ್ಮೆ ಭರವಸೆ ತೋರಿರುವ ತೆಲಂಗಾಣದ ಜನರಿಗೆ ಧನ್ಯವಾದ ಅರ್ಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಕಠಿಣ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
150 ವಾರ್ಡ್ಗಳ ಪೈಕಿ 131 ವಾರ್ಡ್ಗಳ ಫಲಿತಾಂಶ ಪ್ರಕಟವಾಗಿದೆ. ಟಿಆರ್ಎಸ್–53, ಎಐಎಂಐಎಂ–42, ಬಿಜೆಪಿ–35 ಹಾಗೂ ಕಾಂಗ್ರೆಸ್–2 ವಾರ್ಡ್ಗಳಲ್ಲಿ ಗೆಲುವು.
ತೆಲಂಗಾಣ ರಾಜ್ಯದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿನ ಅಪ್ಡೇಟ್ ಪ್ರಕಾರ, ಟಿಆರ್ಎಸ್ 37 ವಾರ್ಡ್ಗಳಲ್ಲಿ ಮತ್ತು ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ 18 ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 15 ವಾರ್ಡ್ಗಳಲ್ಲಿ ಹಾಗೂ ಕಾಂಗ್ರೆಸ್ 2 ವಾರ್ಡ್ನಲ್ಲಿ ಗೆಲುವು ಪಡೆದಿದೆ.
ಪಕ್ಷವಾರು ಮುನ್ನಡೆ–
* ಟಿಆರ್ಎಸ್: 58
* ಬಿಜೆಪಿ: 39
* ಎಐಎಂಐಎಂ: 33
* ಕಾಂಗ್ರೆಸ್: 2
'ದೇಶದಲ್ಲಿ ರೈತರ ಪ್ರತಿಭಟನೆ ಸೇರಿದಂತೆ ಹಲವು ಸಮಸ್ಯೆಗಳಿವೆ, ಆದರೆ ಕೇಂದ್ರ ಸರ್ಕಾರದ ಮುಖಂಡರು ಪಾಲಿಕೆ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದು ಏಕೆಂದು ತಿಳಿಯುತ್ತಿಲ್ಲ' ಎಂದು ತೆಲಂಗಾಣ ಸಚಿವ ತಲನಾನಿ ಶ್ರೀನಿವಾಸ್ ಯಾದವ್ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರು ಅಕಾಡಕ್ಕಿಳಿದು ಪ್ರಚಾರ ಕೈಗೊಂಡಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಟಿಆರ್ಎಸ್ ಮುನ್ನಡೆ ಕಾಯ್ದುಕೊಂಡಿದೆ. 70 ವಾರ್ಡ್ಗಳಲ್ಲಿ ಟಿಆರ್ಎಸ್ ಮುಂದಿದ್ದರೆ, ಬಿಜೆಪಿ 30 ವಾರ್ಡ್ಗಳಲ್ಲಿ ಹಾಗೂ ಎಐಎಂಐಎಂ 45 ವಾರ್ಡ್ಗಳಲ್ಲಿ, ಕಾಂಗ್ರೆಸ್ 4 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿವೆ.