ಕಲ್ಲಿದ್ದಲು ವಹಿವಾಟು, ಸಾರಿಗೆ, ಸರ್ಕಾರಿ ಗುತ್ತಿಗೆ, ಉಕ್ಕು ಸಂಬಂಧಿತ ಉದ್ಯಮ ಹಾಗೂ ಇಬ್ಬರು ರಾಜಕೀಯ ನಾಯಕರು ಮತ್ತು ಅವರ ಸಹವರ್ತಿಗಳಿಗೆ ಸಂಬಂಧಿತ ಉದ್ಯಮಗಳ ಮೇಲೆ ದಾಳಿ ನಡೆದಿದೆ. ಶೋಧ ಕಾರ್ಯಾಚರಣೆಯಿಂದ ಕೆಲ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.