ಡಬ್ಲ್ಯುಎಸಿಯ ವಾಯುಪ್ರದೇಶ ಭದ್ರತಾ ದಾಖಲೆಗಳ ಬಗ್ಗೆಯೂ ಭದೌರಿಯಾ ಶ್ಲಾಘನೆ ವ್ಯಕ್ತಪಡಿಸಿ, ಸುರಕ್ಷಿತ ಕಾರ್ಯಾಚರಣೆ ವಾತಾವರಣವನ್ನು ಮುಂದುವರಿಸುವಂತೆ ಸಲಹೆ ನೀಡಿದರು. ಸ್ವಾವಲಂಬನೆ, ದೇಶೀಯ ಉತ್ಪಾದನೆ ಹಾಗೂ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ಭಾರತದ ವಾಯುಪಡೆಯನ್ನು ಪ್ರಬಲ ಶಕ್ತಿಯಾಗಿಸಬೇಕು ಎಂದೂ ಅವರು ಹೇಳಿದರು.