ಶಿವಸೇನಾದ ಮುಖವಾಣಿ ‘ಸಾಮ್ನಾ’ದಲ್ಲಿ ತಮ್ಮ ವಾರದ ಅಂಕಣ ‘ರೋಖ್ಠೋಕ್’ನಲ್ಲಿ ರಾವುತ್ ಅವರು ‘ರಾಹುಲ್ ಗಾಂಧಿಯವರು ದೇಶದ ಜನರನ್ನು ಸಂಪರ್ಕಿಸಲು ಕನ್ಯಾಕುಮಾರಿಯಿಂದ ಶ್ರೀನಗರದವರೆಗೆ ಹಮ್ಮಿಕೊಂಡಿರುವ ‘ಭಾರತ್ ಜೋಡೊ ಯಾತ್ರೆ’ ಕಳೆದ ವರ್ಷ ಯಶಸ್ವಿಯಾಗಿದೆ. ಈ ತಿಂಗಳ ಕೊನೆಯಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾಗುವ ಸಾಧ್ಯತೆ ಇದೆ. ರಾಹುಲ್ ತಮ್ಮ ಯಾತ್ರೆಯ ಉದ್ದೇಶ–ಗುರಿ ಸಾಧಿಸುತ್ತಾರೆ. 2022ರ ವರ್ಷವು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಹೊಸ ಹೊಳಪು ಮತ್ತು ವರ್ಚಸ್ಸು ನೀಡಿದೆ. ಈ ಬೆಳವಣಿಗೆ 2023ರಲ್ಲೂ ಉಳಿದರೆ, 2024ರ ಸಾಮಾನ್ಯ ಚುನಾವಣೆಗಳಲ್ಲಿ ದೇಶವು ರಾಜಕೀಯ ಬದಲಾವಣೆ ಕಾಣಲಿದೆ’ ಎಂದು ರಾವುತ್ ಭವಿಷ್ಯ ನುಡಿದಿದ್ದಾರೆ.