ಬ್ಲೂಂಬರ್ಗ್ ಇಂಡಿಯಾ ಎಕನಾಮಿಕ್ ಫೋರಂ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ವಾಸ್ತವ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು ಎಂಬ ಬದ್ಧತೆಯ ಆಧಾರದಲ್ಲೇ ಮೂರು ದಶಕಗಳಲ್ಲಿ ಭಾರತ-ಚೀನಾದ ಸಂಬಂಧ ಅಭಿವೃದ್ಧಿಯಾಗಿದೆ. ಈ ಮೂಲಬದ್ಧತೆಗೆ ಧಕ್ಕೆಯಾದರೆ, ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಆ ಬದ್ಧತೆಗೆ ಭಾರತವು ಧಕ್ಕೆ ತಂದಿಲ್ಲ ಎಂಬುದನ್ನು ಗಮನಿಸಬೇಕು’ ಎಂದು ಅವರು ಹೇಳಿದ್ದಾರೆ.