ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ, 2019ರ ಫೆಬ್ರುವರಿ 14ರಂದು ಸಿಆರ್ಪಿಎಫ್ ಬೆಂಗಾವಲು ವಾಹನಗಳ ಮೇಲಿನ ದುಷ್ಕೃತ್ಯದಲ್ಲಿ ಅಲಿಂ ಗಿರ್ ಅಲಿಯಾಸ್ ಮಕ್ತಾಬ್ ಅಮೀರ್, ಮುಜಾಹಿದ್ ಭಾಯ್ ಮತ್ತು ಮುಹಮ್ಮದ್ ಭಾಯ್ ಭಾಗಿಯಾಗಿದ್ದ ಎಂದು ಹೇಳಿದೆ. ಅಲ್ಲದೆ ಜೈಷ್-ಎ-ಮೊಹಮ್ಮದ್(ಜೆಇಎಂ) ಉಗ್ರ ಸಂಘಟನೆ ಪರವಾಗಿ ಭಾರತದ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.