ಸಾಂಕ್ರಾಮಿಕ ರೋಗದ ಅನುಭವಗಳನ್ನು ಹಂಚಿಕೊಂಡ ಮೋದಿ, 'ಈ ಅವಧಿಯಲ್ಲಿ, ದೇಶವು ಕೇವಲ ವೈರಸ್ ಸವಾಲನ್ನು ಮಾತ್ರ ಎದುರಿಸಲಿಲ್ಲ. ಆದರೆ ಇತರ ಕ್ಷೇತ್ರಗಳ ಸಮಸ್ಯೆಗಳನ್ನು ಕೂಡ ನಿಭಾಯಿಸಿದೆ. ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ, ಚಂಡಮಾರುತಗಳು, ಭೂಕಂಪಗಳು ಸಂಭವಿಸಿದವು ಮತ್ತು ನಂತರ ಮಿಡತೆ ಸಮೂಹ ದಾಳಿ ನಡೆದಿತ್ತು. ಆದರೆ ಈ ಎಲ್ಲ ಸಮಸ್ಯೆಗಳ ಹೊರತಾಗಿಯೂ, ಭಾರತವು ಬಲಿಷ್ಟವಾಗಿ ಹೊರಹೊಮ್ಮಿತು ಮತ್ತು ಇಡೀ ಜಗತ್ತು ಈಗ ಭಾರತದ ಸಾಮರ್ಥ್ಯವನ್ನು ಅರಿತುಕೊಂಡಿದೆ' ಎಂದು ತಿಳಿಸಿದ್ದಾಗಿ ಮೇಘವಾಲ್ ಪ್ರಸ್ತಾಪಿಸಿದರು.