ಇದು ಯುಪಿಎ ಸರ್ಕಾರವು ‘ಅಪ್ರಯೋಜಕ’ವಾಗಿತ್ತು ಎಂಬುದನ್ನು ಖಚಿತಪಡಿಸುತ್ತದೆ ಎಂದು ಬಿಜೆಪಿ ವಕ್ತಾರ ಗೌರವ ಭಾಟಿಯಾ ಟೀಕಿಸಿದ್ದಾರೆ.‘ಇದರಿಂದ ಯುಪಿಎ ಸರ್ಕಾರವು ಸಂವೇದನಾಶೀಲರಹಿತವಾಗಿತ್ತು, ಅಪ್ರಯೋಜಕ ಮತ್ತು ರಾಷ್ಟ್ರೀಯ ಭದ್ರತೆ ವಿಚಾರದಲ್ಲೂ ಕಾಳಜಿ ಹೊಂದಿರರಲಿಲ್ಲ ಎಂಬುದು ಗೊತ್ತಾಗುತ್ತದೆ’ಎಂದು ಟೀಕಿಸಿದ್ದಾರೆ.
ಭಾಟಿಯಾ ಟೀಕೆಗೆ ಟ್ವೀಟ್ ಮೂಲಕ ಪ್ರತಕ್ರಿಯಿಸಿರುವ ತಿವಾರಿ, ‘ಭಾರತದ ಮೇಲೆ ಪ್ರಭಾವ ಬೀರಿದ ರಾಷ್ಟ್ರೀಯ ಭದ್ರತಾ ಪರಿಸ್ಥಿತಿಗಳ ಅಸಮರ್ಪಕ ನಿರ್ವಹಣೆ ಕುರಿತ 304-ಪುಟಗಳ ಪುಸ್ತಕದ ಒಂದು ಆಯ್ದ ಭಾಗಕ್ಕೆ ಬಿಜೆಪಿಯ ಪ್ರತಿಕ್ರಿಯೆಯನ್ನು ಕಂಡು ನನಗೆ ನಗು ಬರುತ್ತಿದೆ. ರಾಷ್ಟ್ರೀಯ ಭದ್ರತೆಯನ್ನು ಅವರು(ಬಿಜೆಪಿ ಸರ್ಕಾರ) ನಿರ್ವಹಿಸಿದ ರೀತಿ ಬಗ್ಗೆ ಇರುವ ಕೆಲವು ವಿಶ್ಲೇಷಣೆಗಳಿಗೆ ಇದೇ ರೀತಿ ಪ್ರತಿಕ್ರಿಯಿಸುತ್ತಾರಾ?’ ಎಂದು ಪ್ರಶ್ನಿಸಿದ್ದಾರೆ.