‘ಪಶ್ಚಿಮ ಹಾಗೂ ಪೂರ್ವ ಘಟ್ಟದಂಥ ಪರ್ವತ ಪ್ರದೇಶದಲ್ಲಿ ಮುಂಗಾರು ಸಂದರ್ಭದಲ್ಲಿ ಹಲವು ದುರ್ಘಟನೆಗಳು ಸಂಭವಿಸಿರುವುದನ್ನು ನಾವು ನೋಡಿದ್ದೇವೆ. ಹಿಮಾಲಯ ಪರ್ವತ ಅಥವಾ ಈಶಾನ್ಯ ರಾಜ್ಯಗಳಲ್ಲಿ ಕಂಡುಬರುತ್ತಿದ್ದ ಭೂಕುಸಿತದಂಥ ಘಟನೆಗಳು ಕರ್ನಾಟಕ ಮತ್ತು ಕೇರಳದಲ್ಲಿ ನಡೆದಿದೆ. ಹಿಮಾಲಯ ಪ್ರದೇಶದಲ್ಲಿ ನಡೆಯುವ ಭೂಕಂಪ ಅಥವಾ ಮೇಘಸ್ಫೋಟವು ಸ್ಥಳೀಯ ಕೃಷಿ, ಕೈಗಾರಿಕೆಗಳು ಹಾಗೂ ಜನಜೀವನಕ್ಕೂ ಹಾನಿಯುಂಟು ಮಾಡಿವೆ. ಹೀಗಾಗಿ ಈ ಕೇಂದ್ರವು ಭಾರತಕ್ಕೆ ಮಾತ್ರವಲ್ಲದೆ ಹಿಮಾಲಯ ಪರ್ವತ ಪ್ರದೇಶವಿರುವ ನೆರೆ ರಾಷ್ಟ್ರಗಳಿಗೂ ಹವಾಮಾನ ಮುನ್ಸೂಚನೆ ನೀಡಲಿವೆ’ ಎಂದು ಹೇಳಿದರು.