ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮೀನುಗಾರರನ್ನು ರಕ್ಷಿಸಿದ ಶ್ರೀಲಂಕಾ ನೌಕಾ ಪಡೆ

Last Updated 1 ಆಗಸ್ಟ್ 2022, 16:53 IST
ಅಕ್ಷರ ಗಾತ್ರ

ಕೊಲಂಬೊ: ಆರು ಭಾರತೀಯ ಮೀನುಗಾರರಿದ್ದ ಮೀನುಗಾರಿಕಾ ದೋಣಿಯು ಎಂಜಿನ್‌ ಸಮಸ್ಯೆಯಿಂದ ತೊಂದರೆಗೆ ಸಿಲುಕಿತ್ತು. ಈ ವೇಳೆ ಶ್ರೀಲಂಕಾ ನೌಕಾ ಪಡೆಯು ಭಾರತೀಯ ಮೀನುಗಾರರನ್ನು ರಕ್ಷಣೆ ಮಾಡಿದೆ.

ಮೀನುಗಾರರು ಶ್ರೀಲಂಕಾಗೆ ಸೇರಿದ ಸಮುದ್ರದ ಉತ್ತರ ದಿಕ್ಕಿನಲ್ಲಿರುವ ತಲೈಮನ್ನಾರ್‌ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ತೊಂದರೆಗೆ ಸಿಲುಕಿದ್ದರು. ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆಯು ಮೀನುಗಾರರನ್ನು ರಕ್ಷಿಸಿದ್ದಾರೆ. ನಂತರ ಅಂತರರಾಷ್ಟ್ರೀಯ ಜಲ ಗಡಿಯಲ್ಲಿದ್ದ ಇನ್ನೊಂದು ಭಾರತೀಯ ಮೀನುಗಾರರ ಗುಂಪಿದ್ದ ಜಾಗಕ್ಕೆ ಆರು ಮಂದಿಯನ್ನು ಕರೆದೊಯ್ದಿದ್ದಾರೆ’ ಎಂದು ನೌಕಾ ಪಡೆಯ ಮಾಧ್ಯಮ ವಿಭಾಗ ಹೇಳಿದೆ ಎಂದು ನ್ಯೂಸ್‌ಫಸ್ಟ್‌ ಶ್ರೀಲಂಕಾ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಎಂಜಿನ್‌ ಸಮಸ್ಯೆಯಿಂದ ಭಾರತೀಯ ಮೀನುಗಾರರು ಶ್ರೀಲಂಕಾಗೆ ಬಂದಿದ್ದರು ಎಂದು ನೌಕಾಪಡೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT