ನವದೆಹಲಿ: ‘ಬಿಜೆಪಿ ಜೊತೆಗೆ ಗುರುತಿಸಿಕೊಂಡಿರುವ ಯಾರೊಬ್ಬರಿಗೂ ದೇಶವನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕುವೈತ್ನ 22 ಸಂಸದರು ಒತ್ತಾಯಿಸಿದ್ದಾರೆ’ ಎಂದು ಅಲ್ಲಿನ ವಕೀಲರೊಬ್ಬರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕಾಂಗ್ರೆಸ್ನ ಸಂಸದ ಶಶಿ ತರೂರ್ ಮರುಟ್ವೀಟ್ ಮಾಡಿದ್ದಾರೆ. ಇದರ ಹಿಂದೆಯೇ, ಕುವೈತ್ ವಕೀಲರ ಟ್ವೀಟ್ಗೆ ಅಲ್ಲಿನ ಭಾರತದ ರಾಯಭಾರ ಕಚೇರಿಯು ಬೇಸರ ವ್ಯಕ್ತಪಡಿಸಿದೆ.