ಇನ್ನು ಎರಡೇ ವರ್ಷದಲ್ಲಿ ಸ್ವಾತಂತ್ರ್ಯ ಬಂದು 75 ವರ್ಷಗಳಾಗಲಿವೆ ಎಂದು ನೆನಪಿಸಿದ ಅವರು, ಭಾಷಣದಲ್ಲಿ ಯಾರ ಹೆಸರೂ ಉಲ್ಲೇಖಿಸಲಿಲ್ಲ. ‘ಅವರು ಜನರ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದ್ದಾರೆ. ಅವರಿಗೇನು ಬೇಕು? ಅವರಿಗೆ ಜನರು, ಯುವಜನರು, ಮಹಿಳೆಯರು, ರೈತರು, ವ್ಯಾಪಾರಿಗಳು, ಯೋಧರು ಬಾಯಿ ಮುಚ್ಚಿಕೊಂಡಿರುವುದು ಬೇಕು’ ಎಂದರು.