ಹಲವೆಡೆ ರಸ್ತೆಗಳಿಗೆ ಭಾರಿ ಹಾನಿ ಉಂಟಾಗಿದೆ. ಇವುಗಳಲ್ಲಿ ಕೆಲವು ರಸ್ತೆಗಳ ಮರು ನಿರ್ಮಾಣ ಬಹಳ ಕಷ್ಟ. ನೀರಾವರಿ, ವಿದ್ಯುತ್ ಸೌಲಭ್ಯ, ಕಟ್ಟಡ ಮತ್ತು ಸೇತುವೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿವೆ. ರಸ್ತೆಗಳನ್ನು ಕೆಲವು ವಾರಗಳೊಳಗೆ ದುರಸ್ತಿಗೊಳಿಸಲಾಗುವುದು.ದಿಮಾ ಹಸಾವೊ – ಬರಾಕ್ ಕಣಿವೆ ಹಾಗೂ ನೆರೆ ರಾಜ್ಯಗಳಾದ ತ್ರಿಪುರಾ, ಮಿಜೋರಾಂ ಮತ್ತು ಮಣಿಪುರದ ನಡುವೆ ಸಂಪರ್ಕ ಕಲ್ಪಿಸುವ ರೈಲು ಸೇವೆಯನ್ನು ಜುಲೈ ತಿಂಗಳಲ್ಲಿ ಪುನರಾರಂಭಗೊಳಿಸಲಾಗುವುದು ಎಂದುಹಿಮಂತ್ ಬಿಸ್ವಾ ಅವರು ಹೇಳಿದ್ದಾರೆ.