23 ವರ್ಷದ ಸಂತ್ರಸ್ತೆ ಶನಿವಾರ ಆಕೆಯ ತಾಯಿಯ ಜೊತೆ ಯಾವುದೋ ಕೆಲಸದ ನಿಮಿತ್ತ ಜೈಪುರದಿಂದ ದೆಹಲಿಗೆ ಬಂದಿದ್ದರು. ಕಾಲಿಂದಿ ಕುಂಜ್ ರಸ್ತೆ ಸಮೀಪ ನಡೆದು ಹೋಗುತ್ತಿದ್ದಾಗ ರಿಕ್ಷಾದಿಂದ ಬಂದಿಳಿದ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದ್ರವರೂಪದ ವಸ್ತುವನ್ನು ಯುವತಿ ಮೇಲೆ ಎರಚಲಾಗಿದ್ದು, ನೀಲಿ ಶಾಹಿ ಎಂಬುದು ಪ್ರಾಥಮಿಕ ಪರೀಕ್ಷೆಯಲ್ಲಿ ತಿಳಿದುಬಂದಿದೆ. ದಾಳಿಕೋರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಈಶಾ ಪಾಂಡೆ ಹೇಳಿದ್ದಾರೆ.