ನವದೆಹಲಿ: ಕೊರೊನಾ ಸೋಂಕು ಪರಿಹಾರಕ್ಕೆ ಅಂತರರಾಷ್ಟ್ರೀಯ ಸಮುದಾಯ ಪರಿಹಾರ ಒದಗಿಸಲಿದೆ ಹಾಗೂ ಈ ಬಿಕ್ಕಟ್ಟಿನಿಂದ ಶಕ್ತಿಯುತವಾಗಿ ಹೊರಹೊಮ್ಮಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕೃತ ಹೇಳಿಕೆಯ ಅನುಸಾರ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವೀಯತೆಯ ಉಳಿವಿಗಾಗಿ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಂಘಟಿತ ಕಾರ್ಯ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಕೊರೊನಾ ಸಂಕಷ್ಟಕ್ಕೆ ಪರಿಹಾರ ಹುಡುಕಲು ಅಂತರರಾಷ್ಟ್ರೀಯ ಸಮುದಾಯ ಯತ್ನಿಸುತ್ತಿದ್ದು, ಬಹುತೇಕ ಹತ್ತಿರದಲ್ಲಿದೆ. ಈ ಬಿಕ್ಕಟ್ಟಿನಿಂದ ಹೊರಬರಲಿದೆ ಎಂದು ಆಶಿಸಿದರು.
ವರ್ಚುವಲ್ ಸ್ವರೂಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಹಂಗೇರಿ ಪ್ರತಿನಿಧಿ, ಮಾಲ್ಡೀವ್ಸ್ನ ರಾಯಭಾರಿ ಮತ್ತು ತಜಿಕಿಸ್ತಾನದ ರಾಯಭಾರಿ ಅವರ ನೇಮಕವನ್ನು ಸ್ವೀಕರಿಸಿದ್ದು, ಅವರಿಗೆ ಶುಭಕೋರಿದರು.